ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ
ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದಲ್ಲಿ ಮಾ. 4 ರಿಂದ 8ರ ತನಕ ಅದ್ದೂರಿಯಾಗಿ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಫೆ.8 ರಂದು ಕ್ಷೇತ್ರದ ಅರ್ಚಕ ಶ್ರೀನಿವಾಸ ಯಾನೆ ಅಪ್ಪು ಪೂಜಾರಿಯವರ ವಿಶೇಷ ಪ್ರಾರ್ಥನೆಯೊಂದಿಗೆ ಮೂಲ್ಕಿ ಸೀಮೆಯ ಅರಸತಾದ ದುಗ್ಗಣ್ಣ ಸಾವಂತ ಅರಸರು ಇತರ ಗಣ್ಯರೊಂದಿಗೆ ಬಿಡುಗಡೆಗೊಳಿಸಿದರು.

ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ವಾಮನ್ ಇಡ್ಯ ಅಧ್ಯಕ್ಷತೆಯನ್ನು ವಹಿಸಿದ್ದು ಮುಖ್ಯ ಅತಿಥಿಗಳಾಗಿ ಮುಂಬಯಿಯ ಉದ್ಯಮಿ, ತೀಯಾ ಸಮಾಜ ಮುಂಬಯಿಯ ಮಾಜಿ ಅಧ್ಯಕ್ಷ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಬೆಳ್ಳಡ, ಬಿಲ್ಲವರ ಅಸೋಷಿಯೇಶನ್ ಮುಂಬಯಿಯ ಗೌರವ ಅಧ್ಯಕ್ಷ ಎಲ್ ವಿ ಅಮೀನ್, ಧನಂಜಯ ಶೆಟ್ಟಿ ಸಸಿಹಿತ್ಲು, ಸಮಿತಿಯ ಪದಾಧಿಕಾರಿಗಳಾದ ಸುನೀಲ್ ಆಳ್ವ, ದಿವಾಕರ ಸಾಮಾನಿ, ಕಸ್ತೂರಿ ಪಂಜ, ಚಂದ್ರಶೇಖರ ನಾನೀಲ್, ಗೀತಾ ಪಿ ಕುಮಾರ್, ಅಭಿವೃದ್ದಿ ಸಮಿತಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಉದಯ ಸುವರ್ಣ ಅಗ್ಗಿದ ಕಳಿಯ, ವಿನೋದ ಸಾಲ್ಯಾನ್ ಬೆಳ್ಳಾಯರು, ವಿನೋದ ಬೊಳ್ಳೂರು, ದಿನಕರ ಎನ್. ಹಳಿಯಂಗಡಿ, ಗೀತಾಂಜಲಿ ಸುವರ್ಣ, ಸತೀಶ್ ಶೆಟ್ಟಿ ಕಟೀಲು, ಶೋಭೇಂದ್ರ ಸಸಿಹಿತ್ಲು, ವಿ ಕೆ ಯಾದವ್, ಭೋಜ ಗುರುಕಾರ, ರಮೇಶ್ ಬಂಗೇರ, ಸುರೇಶ್ ಬಂಗೇರ, ಸವಿತಾ ಉದಯ್, ರಜತ್ ಸಸಿಹಿತ್ಲು, ಮೋಹನ್ ಸುವರ್ಣ, ಗಿರೀಶ್ ಶ್ರೀಯಾನ್, ಮೋಹನ್ ಶೆಟ್ಟಿಗಾರ್, ಕಿಶೋರ್ ಗುರಿಕಾರ, ನಾಗೇಶ್ ಬಂಗೇರ, ಧೀರಜ್ ಶ್ರೀಯಾನ್, ಕಿರಣ್ ಗುರುಕಾರ, ಮತ್ತಿತರರು ಉಪಸ್ಥಿತರಿದ್ದರು.
ರಾಜೇಶ್ ಪ್ರಸಾದ್ ವಿಚಾರ ನಿರೂಪಿಸಿದರು.