www.gurufront.com

ಉಸಿರನ್ನು ಗಮನಿಸು । ಗಮನಿಸಿ ಗಮನಿಸಿ ಮುಕ್ತಿಯ ಪಡೆ ಎಂದ ಬುದ್ಧ ।

ಅದು ಇದ್ದ ಹಾಗೇ ನೋಡು ಮೂಗಿನ ದ್ವಾರದಲ್ಲಿ

ಮೂಗಿನ ಪರದೆಗೆ ಸ್ಪರ್ಶಿಸುವದನ್ನು ಗಮನಿಸು |

ಉಸಿರ ಅನುಭವ ಆಗದಿದ್ದಾಗ । ದೀರ್ಘ ಉಸಿರ ಒಂದೆರಡು ಸಲ ಎಳೆ |

ದೀರ್ಘ ಉಸಿರ ಅಭ್ಯಾಸ ಬೇಡ |

ಸ್ಪರ್ಶ ಅರಿವು ತಿಳಿಯಲು ಅಷ್ಟೇ ಎಂದ ಬುದ್ಧ |

ಪದ್ಮಾಸನ, ಸಿದ್ಧಾಸನದಲ್ಲಿ ಕೂರು । ಯಾವುದೇ ಆರಾಮದ ಆಸನ ಇರಲಿ |

ಬೆನ್ನು. ಕತ್ತು ನೇರವಾಗಿರಲಿ | ಆರಾಮವಾಗಿ ಕಣ್ಣು ಮುಚ್ಚಿ ಧ್ಯಾನಿಸು ಎಂದ ಬುದ್ಧ ॥

ಧ್ಯಾನ ಮಂದಿರದಲ್ಲಿ ಶೀಲವ ಪಾಲಿಸು ಗುಣ ಶೀಲವೇ ಧ್ಯಾನದ ಪಂಚಾಂಗ ।

ಮೌನವ ಪಾಲಿಸಿ ಮೌನ ವೃತದಲ್ಲಿರು ಪ್ರಾರ್ಥನೆ, ಸತ್ಸಂಗದಿ ಗುರುವಿಗೆ ಶರಣಾಗಿ ಇರು |

ಗುರು ಹಿರಿಯರಿಗೆ ನಮಿಸು । ಗುರುವಿಗೆ ಶರಣಾಗಿ ಸೇವೆಯ ಮಾಡು |

ಧ್ಯಾನ ಧರ್ಮದಿ ಸುಖವ ಅನುಭವಿಸು । ಧ್ಯಾನದಿ ಸಮೃದ್ಧಿ ಪಡೆದು ಗುರುವಾಗಿ ಮೆರೆಯು ॥

ಎಲ್ಲಾ ಕರ್ಮಕ್ಕೆ ಮನವೇ ಕಾರಣ । ಮನವೇ ಶಾರೀರಿಕ ಕರ್ಮಕ್ಕೆ ಕಾರಣ |

ಮನವ ಶಾಂತದಿ ನಿಗ್ರಹಿಸು ಶೀಲ ಧರ್ಮದಿ ಮನವ ಶುದ್ದೀಕರಿಸು ।।

ಕಾಮ, ಮದ, ಮತ್ಸರ, ಕೋಪ, ದ್ವೇಷ, ರಾಗ, ಲೋಭವ ಬಿಡು |

ದಾನ ಧರ್ಮ ಪುಣ್ಯ ಕಾರ್ಯ ಮಾಡಿ -ಪಾಪಕರ್ಮದಿ ದೂರವಿದ್ದು ಧ್ಯಾನಿಸು |

-ಕಡಲ ಸೃಷ್ಟಿ

Leave a Reply

Your email address will not be published. Required fields are marked *