www.gurufront.com


ಮಾಡೂರು ಭಗವತೀ ಕ್ಷೇತ್ರದ ಗೌರವ ಅಧ್ಯಕ್ಷರಾಗಿ ಮುಂಬಯಿಯ ಉದ್ಯಮಿ ಕುಮಾರ್ ಎನ್. ಬಂಗೇರ ಆಯ್ಕೆ

ಮುಂಬಯಿ : ತೀಯಾ ಸಮುದಾಯದ ಮಾಡೂರು ಶ್ರೀ ಪಾಡಾಂಗರ ಭಗವತೀ ಕ್ಷೇತ್ರದ ಗೌರವ ಅಧ್ಯಕ್ಷ ಹಾಗೂ ಪ್ರಮುಖ ಟ್ರಸ್ಟಿ ಯಾಗಿ ಮುಂಬಯಿ, ಮಂಗಳೂರು ಹಾಗೂ ದುಬಾಯಿಯ ಉಧ್ಯಮಿ, ಕೆಲವು ವರ್ಷಗಳ ಹಿಂದೆ ತೀಯಾ ಸಮಾಜದಲ್ಲಿ ಇತಿಹಾಸ ನಿರ್ಮಿಸಿದ ಸುಮಾರು ಒಂದು ತಿಂಗಳು ವಿವಿದೆಡೆ ಜರಗಿದ ತೀಯಾ ಉತ್ಸವದ ರೂವಾರಿ ಕುಮಾರ್ ಎನ್. ಬಂಗೇರ ಆಯ್ಕೆಯಾಗಿದ್ದಾರೆ.

ಶ್ರೀ ಕ್ಷೇತ್ರದ ಟ್ರಸ್ಟಿನ ನೂತನ ಆಡಳಿತ ಮುಕ್ತೇಸರರಾಗಿ ವಿನಯ ಭೂಷಣ್ , ಕಾರ್ಯದರ್ಶಿಯಾಗಿ ಅಶೋಕ್ ಉಚ್ಚಿಲ್ , ಕೋಶಾಧಿಕಾರಿಯಾಗಿ ಜಯರಾಮ ಚೆಂಬುಗುಡ್ಡೆ ಆಯ್ಕೆಯಾದರು. ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಕುಮಾರ್ ಬಂಗೇರ, ಅದ್ಯಕ್ಷರಾಗಿ ಸಂತೋಷ್ ಬಂಗೇರ, ಕಾರ್ಯದರ್ಶಿಯಾಗಿ ಶ್ರೀ ಹೇಮಚಂದ್ರ ಬಬ್ಬುಕಟ್ಟೆ, ಕೋಶಾಧಿಕಾರಿಯಾಗಿ ಭಾಸ್ಕರ್ ಖಿ ಆಯ್ಕೆಯಾದರು.

ಇತರ ಪದಾಧಿಕಾರಿಗಳ ವಿವರ ಹೀಗಿದೆ, ಭಾಸ್ಕರ್ ಖಿ, ಜಯಪ್ರಕಾಶ್, ಉಮೇಶ್ಚಂದ್ರ, ಶ್ರೀಮತಿ ಗಾಯತ್ರಿ ಸುಂದರ, ದಿನೇಶ್ ಕೆ. ಬಿ., ವಿಜಯ್ ಕುಮಾರ್, ಹೇಮಚಂದ್ರ ಬಬ್ಬುಕಟ್ಟೆ, ಚೆನ್ನಪ್ಪ ಬಂಗೇರ, ರಮೇಶ್ ಬಂಗೇರ, ರಾಮ ಸುಂದರಿಬಾಗ್, ನಾಗಪ್ಪ ಅಡ್ಯಾರ್, ಕಿಶೋರ್ ತುಂಬೆ, ಶ್ರೀಮತಿ ಗುಣವತಿ ರಾಘವ, ಶ್ರೀಮತಿ ಸರಳಾ ನಾಗೇಶ್, ಶ್ರೀಮತಿ ಬಬಿತ ರಾಜ್ ಮತ್ತು ಶ್ರೀಮತಿ ನಯನ ಮಾದವ (ಟ್ರಷ್ಟಿಗಳು): ಗೌರವ ಸಲಹೆಗಾರರಾಗಿ: ರಾಮಚಂದ್ರ ಸಂಕೋಳಿಗೆ, ಜಯಾನಂದ ಬಂಗೇರ, ಜಯಪ್ರಕಾಶ್, ಚಂದ್ರಶೇಖರ್ ಬಂಗೇರ (ಮುಂಬಯಿ) ಮತ್ತು ವಿಜಯ್ ಕುಮಾರ್, ಉಪಾಧ್ಯಕ್ಷರಾಗಿ: ರಾಮ ಸುಂದರಿಬಾಗ್, ರಾಮಚಂದ್ರ ಬಂಗೇರ ಮಾರಿಪಳ್ಳ, ಉಮೇಶ್ಚಂದ್ರ, ಚೆನ್ನಪ್ಪ ಬಂಗೇರ ಮತ್ತು ಶ್ರೀಮತಿ ಗುಣವತಿ, ಜೊತೆ ಕಾರ್ಯದರ್ಶಿಗಳಾಗಿ: ಕಿಶೋರ್ ತುಂಬೆ, ಶ್ರೀಮತಿ ಸಬಿತ ಕುಂಜತ್ತೂರು, ನಿತೇಶ್ ಉಚ್ಚಿಲ ಶ್ರೀಮತಿ ವನಿತ ಮತ್ತು ಶ್ರೀಮತಿ ಶ್ರದ್ದಾ, ಸಂಘಟನಾ ಕಾರ್ಯದರ್ಶಿಗಳಾಗಿ: ಪವನ್ ರಾಜ್ ಕೊಲ್ಯ ನಿಶಿತ್ ಬೋಳಾರ್ ಮತ್ತು ಶ್ರೀಮತಿ ಸೌಮ್ಯ ಮಾಡ ಮಹಿಳಾ ವೇದಿಕೆ: ಪ್ರಧಾನ ಸಂಚಾಲಕಿಯಾಗಿ ಶ್ರೀಮತಿ ಸರಳಾ ನಾಗೇಶ್ ಕಾನೂನು ಸಲಹೆಗಾರರಾಗಿ: ದಿನೇಶ್ ಕೆ. ಬಿ. ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *